ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ , ಮುಕ್ತಗಂಗೋತ್ರಿ , ಮೈಸೂರು

ಕುವೆಂಪು ಅಧ್ಯಯನ ಪೀಠ

ಪರಿಚಯ

ಕರ್ನಾಟಕ ರಾಜ್ಯದ ಮುಕ್ತ ವಿಶ್ವವಿದ್ಯಾನಿಲಯವು 1996 ರಲ್ಲಿ ಸ್ಥಾಪನೆಯಾಗಿದ್ದು 2020-21 ನೇ ಸಾಲಿನಲ್ಲಿ 25 ವರ್ಷಗಳು ತುಂಬಿ 'ಬೆಳ್ಳಿ ಹಬ್ಬ'ವನ್ನು ಆಚರಿಸಿಕೊಂಡಿದೆ. ಕರಾಮುವಿಯು 'ಯು.ಜಿ.ಸಿ' ಮಾನ್ಯತೆಗೆ ಒಳಪಟ್ಟಿದ್ದು, '12ಬಿ' ಮಾನ್ಯತೆಯು ಕೂಡ ದೊರೆತಿದೆ. 'ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ' ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವವಿದ್ಯಾನಿಲಯವು ಎರಡುವರೆಯಿಂದ ಉನ್ನತ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಸಮಾಜದಲ್ಲಿ ಉನ್ನತ ಶಿಕ್ಷಣದಿಂದ ವಂಚಿತರಾದವರು, ಆರ್ಥಿಕವಾಗಿ ಹಿಂದುಳಿದವರು, ಹೆಣ್ಣು ಮಕ್ಕಳು, ಗೃಹಿಣಿಯರು, ಹಲವಾರು ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದೆ ಇರುವವರಿಗೆ, ಸಣ್ಣಪುಟ್ಟ ಉದ್ಯೋಗಗಳಲ್ಲಿ ನಿರತರಾದವರಿಗೆ, ಸಮಾಜದ ಎಲ್ಲಾ ವರ್ಗದವರಿಗೆ ಅತ್ಯಂತ ಮೌಲಿಕವಾದ ನಿರಂತರವಾಗಿ ಶಿಕ್ಷಣವನ್ನು ಪ್ರಾರಂಭಿಸಲು ಕಡಿಮೆ ಶಿಕ್ಷಣದ ಪ್ರವೇಶಕ್ಕೆ ಅವಕಾಶ ನೀಡಿ, ಆಸಕ್ತರ ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ಒದಗಿಸಲಾಗಿದೆ. ಕರಾಮುವಿಯಲ್ಲಿ ವ್ಯಾಸಂಗ ಮಾಡಿರುವವರು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ವ್ಯಕ್ತಿಗಳಾಗಿ ಹಾಗೂ ಗಣ್ಯವ್ಯಕ್ತಿಯಾಗಿ ಮಾಡಿದ್ದಾರೆ. ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉನ್ನತ ಸ್ಥಾನಮಾನದ ಹುದ್ದೆಯನ್ನು ಪಡೆಯುತ್ತಿದ್ದಾರೆ. ಹೀಗೆ ಕರಾಮುವಿಯು ಸಮಾಜಮುಖಿ, ಶಿಕ್ಷಣಮುಖಿ ಮತ್ತು ಉದ್ಯೋಗಮುಖಿಯಾಗಿ ದಾಪುಗಾಲು ಇಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಕರಾಮುವಿಯು ಉನ್ನತ ವ್ಯಾಸಂಗವನ್ನು ಮಾಡುವುದಕ್ಕೆ ಅವಕಾಶ ಕಲ್ಪಿಸಿರುವುದರ ಜೊತೆಗೆ ನಮ್ಮ ದೇಶದ ಮತ್ತು ನಾಡಿನ ಮಹಾನ್ ಪುರುಷರ ಪೀಠಗಳನ್ನು ಸ್ಥಾಪಿಸಲಾಗಿದೆ. ಇಂತಹ ಮಹಾನ್ ವ್ಯಕ್ತಿಗಳ ಜೀವನ, ಸಾಧನೆ, ಆದರ್ಶ ಹಾಗೂ ಅವರ ವಿಚಾರಧಾರೆಗಳು ಪ್ರಸಕ್ತ ಜಾಗತಿಕ ಕಾಲಘಟ್ಟದಲ್ಲಿ, ಯುವಜನರಿಗೆ ಅತ್ಯವಶ್ಯಕವಾಗಿದೆ. ಈ ಕರಾಮುವಿಯು ಕುವೆಂಪು ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವನ್ನು ಸ್ಥಾಪಿಸಿದ್ದು ಅದರ ರೂಪರೇಷೆಗಳು ಈ ಮುಂದಿನ ವರದಿ:

1. ಕರಾಮುವಿಯಲ್ಲಿ 'ಕುವೆಂಪು ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ'ವನ್ನು 2012ರಲ್ಲಿ ಸ್ಥಾಪಿಸಲಾಗಿದೆ.

2. ಈ ಕೇಂದ್ರದ ವತಿಯಿಂದ ವಿಶೇಷವಾಗಿ 2012 ರಿಂದ 2020ರ ವರೆಗೆ 'ಸ್ನಾತಕೋತ್ತರ ಕುವೆಂಪು ಸಾಹಿತ್ಯ ಡಿಪ್ಲೊಮಾ ಕೋರ್ಸ್' ಈ ಪೀಠದವತಿಯಿಂದ ಕಲಿಕಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ.

3. ಪ್ರಸ್ತುತ 2021 ರಿಂದ 'ಸ್ನಾತಕೋತ್ತರ ಕುವೆಂಪು ಸಾಹಿತ್ಯ ಸರ್ಟಿಫಿಕೇಟ್ ಕೋರ್ಸ್' ಅನ್ನು ಪ್ರಾರಂಭಿಸಲಾಗಿದೆ. ಈ ಕೋರ್ಸ್ ಒಂದು ವರ್ಷದ ಅವಧಿಯಾಗಿದೆ. ಕುವೆಂಪು ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡುವ ಆಸಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ.

4. ಈ ಪೀಠದ ವತಿಯಿಂದ ಶಿಕ್ಷಣ ಮತ್ತು ರಾಷ್ಟç, ರಾಜ್ಯ ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣಗಳು ಮತ್ತು ವಿಶೇಷ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

5. ಪ್ರತಿ ವರ್ಷ ಕುವೆಂಪು ಅವರ ಜನ್ಮದಿನದಂದು ಶೈಕ್ಷಣಿಕವಾಗಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಧ್ಯೇಯ

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 'ಉನ್ನತ ಶಿಕ್ಷಣ ಎಲ್ಲರಿಗೂ' ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದಲ್ಲಿ ಉನ್ನತ ಶಿಕ್ಷಣದಿಂದ ವಂಚಿತ ಹಿಂದುಳಿದ ವರ್ಗಗಳು, ಆಸಕ್ತ ಮನೆಬಾಗಿಲಿಗೆ ಉನ್ನತ ಶಿಕ್ಷಣವನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ. ಕುವೆಂಪು ಸಂಶೋಧಕ ಮತ್ತು ವಿಸ್ತರಣಾ ಕೇಂದ್ರವು 2011-12ನೇ ಸಾಲಿನಲ್ಲಿ ಪರಿನಿಯಮಕ್ಕೆ ಮಾನ್ಯ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಿಗೆ ಅಂಕಿತ ಕೊಡುಗೆಗಳು. ಸುಮಾರು 11 ವರ್ಷಗಳಿಂದ ಕುವೆಂಪು ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ರಾಷ್ಟಕವಿ ಕುವೆಂಪು ಕುರಿತ ಜನ್ಮದಿನಾಚರಣೆ, ಸಂಶೋಧನೆ, ಕಾರ್ಯಗಾರ ಮತ್ತು ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದೆ, ಇದು ನಿರಂತರವಾಗಿ ಕಾರ್ಯಚಟುವಟಿಕೆಯಿಂದ ಕೂಡಿದೆ. 'ಕುವೆಂಪು ಸಾಹಿತ್ಯ ಪಿ.ಜಿ.ಡಿಪ್ಲೊಮಾ' 2011-12ನೇ ಸಾಲಿನಿಂದ 2021 ಮತ್ತು 2021-2022 ರಿಂದ 'ಸ್ನಾತಕೋತ್ತರ ಕುವೆಂಪು ಸಾಹಿತ್ಯ ಸರ್ಟಿಫಿಕೇಟ್ ಕೋರ್ಸ್' ನಿಂದ ಪ್ರಾರಂಭವಾದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ತೇರ್ಗಡೆಯಾಗುತ್ತಿದ್ದಾರೆ. ಸದರಿ ಕೋರ್ಸ್ನ ಅನುಕೂಲತೆಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.

ಕಾರ್ಯಯೋಜನೆಗಳು

  • ಪ್ರತಿ ವರ್ಷ ಕುವೆಂಪು ಅವರ ಜನ್ಮದಿನಾಚರಣೆ ಆಚರಿಸಲಾಗುತ್ತದೆ.
  • ರಾಜ್ಯ/ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು/ಕಾರ್ಯಾಗಾರಗಳು/ಗೋಷ್ಠಿಗಳು/ಕಮ್ಮಟಗಳು/ ಸಮ್ಮೇಳನಗಳಲ್ಲಿ ಕುವೆಂಪು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಭೌತಿಕವಾಗಿ ಹಾಗೂ ಆನ್‌ಲೈನ್ ಮೂಲಕ ಪರಿಚಯಿಸಲಾಗಿದೆ.
  • ಕುವೆಂಪು ಸಾಹಿತ್ಯದ ಗ್ರಂಥಾಲಯ ಮಾಡುವಂತಹದ್ದು.
  • ಕುವೆಂಪು ಸಾಹಿತ್ಯದ ಬಗ್ಗೆ ಪ್ರಾಜೆಕ್ಟ್ ವರ್ಕ್ ಮಾಡಿದ್ದು.
  • ಕುವೆಂಪು ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸುವುದು.
  • ಕುವೆಂಪು ಸಮಗ್ರ ಸಾಹಿತ್ಯದ ಬಗ್ಗೆ ಪ್ರಚಾರ ಮಾಡುವಂತಹದ್ದು.
  • ರಾಜ್ಯದ ವಿವಿಧ ಕಾಲೇಜುಗಳ ಪ್ರಚಾರದೊಂದಿಗೆ ಕುವೆಂಪು ಸಾಹಿತ್ಯವನ್ನು ಮಾಡುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
  • ಕುವೆಂಪು ಅವರ ಪ್ರತಿಮೆಯನ್ನು ಸ್ಥಾಪಿಸಿದ್ದು.
  • ರಾಜ್ಯ/ರಾಷ್ಟçಮಟ್ಟ/ಅಂತರರಾಷ್ಟç ಮಟ್ಟದಲ್ಲಿ ಕುವೆಂಪು ಸಾಹಿತ್ಯದ ಪುಸ್ತಕಗಳು/ಲೇಖನಗಳು/ಪ್ರಬಂಧಗಳನ್ನು ಪ್ರಕಟಿಸಿರುವುದು.
  • ಕುವೆಂಪು ಜೀವನಚರಿತ್ರೆ, ಸಾಧನೆಗಳನ್ನು ತಿಳಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
  • ರಾಜ್ಯದ ವಿವಿಧ ಕಾಲೇಜುಗಳೊಂದಿಗೆ ವಿಶೇಷ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳನ್ನು ನಡೆಸುವುದು.

ಕುವೆಂಪು ವಿರಚಿತ ಭಾವಗೀತೆ, ಚಿತ್ರಕಲೆ, ಆಶುಭಾಷಣ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕುರಿತು

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (29 ಡಿಸೆಂಬರ್ 1904 - 11 ನವೆಂಬರ್ 1994), ಅವರ ಹೆಸರು ಕುವೆಂಪು ಎಂದು ಜನಪ್ರಿಯವಾಗಿ ಪ್ರಸಿದ್ಧರಾಗಿದ್ದಾರೆ, ಅವರು ಭಾರತೀಯ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ವಿಮರ್ಶಕರಾಗಿದ್ದರು. ಅವರು 20 ನೇ ಶತಮಾನದ ಕನ್ನಡದ ಶ್ರೇಷ್ಠ ಕವಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ.

ಡಾ.ಎನ್.ಆರ್.ಚಂದ್ರೇಗೌಡಚಂದ್ರೇಗೌಡ3

ಡಾ.ಎನ್.ಆರ್.ಚಂದ್ರೇಗೌಡ

ಸಂಯೋಜಕರು

 
ಟಾಪ್ ಗೆ ಸ್ಕ್ರೋಲ್