ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠ
- ಮುಖಪುಟ
- ಅಧ್ಯಯನ ಪೀಠಗಳು
- ನಾಲ್ವಡಿ ಕೃಷ್ಣರಾಜ ಒಡೆಯರ್
ಸ್ಥಾಪನೆ, ಉದ್ದೇಶಗಳು
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಒಡೆಯರ್ ವಂಶದ ಸಾಧನೆಗಳು, ಆಡಳಿತ, ಸಮಾನತೆಗೆ ಪ್ರಯತ್ನಗಳು, ಜನಪರ- ಸಾಮಾಜಿಕ ಕೆಲಸಕಾರ್ಯಗಳು ಇವುಗಳನ್ನು ಸಮಾಜದ ಮುಂದೆ ಇಡುವ ಮೂಲಕ ಉತ್ತಮ ಸಮಾಜದ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ.
1.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸದ ಬಗ್ಗೆ ಹೊಸ ಸಂಶೋಧನೆಗಳನ್ನು ನಡೆಸುವುದು.
2.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುವುದು.
3.ಮೈಸೂರು ಅರಸರ ಇತಿಹಾಸ, ಕಲೆ, ವಾಸ್ತುಶಿಲ್ಪ, ಆಡಳಿತ, ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಹೊಸ ಸಂಶೋಧನೆಗಳನ್ನು ನಡೆಸುವುದು.
4.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೈಸೂರು ಅರಸರ ಬಗೆಗಿನ ಹೊಸ ವಿಚಾರಸಂಕಿರಣ, ಕಾರ್ಯಗಾರ, ಇತ್ಯಾದಿಗಳನ್ನು ನಡೆಸುವುದು.
5.ಪುಸ್ತಕ ಪ್ರಕಟಣೆ, ಸಂಶೋಧನಾಗ್ರಂಥ ಪ್ರಕಟಣೆ, ವಿಶೇಷ ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವುದು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠವು ದಿನಾಂಕ 04/08/2012 ರಲ್ಲಿ ಸ್ಥಾಪನೆ ಈ ಪೀಠಕ್ಕೆ 06/07/2013 ರಿಂದ ಡಾ. ಶಲ್ವ ಪಿಳ್ಳೈ ಅಂಗಾರ್, ಮುಖ್ಯಸ್ಥರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನೆ ವಿಭಾಗ ರವರ ಗೌರವ ನಿರ್ದಶಕರನಾಗಿ ಮಾಡಲಾಗಿದೆ.

ನಮ್ಮ ಬಗ್ಗೆ
ಕೃಷ್ಣರಾಜ ಒಡೆಯರ್ IV (4 ಜೂನ್ 1884 - 3 ಆಗಸ್ಟ್ 1940) 1894 ರಿಂದ 1940 ರಲ್ಲಿ ಅವರ ಮರಣದ ತನಕ ಮೈಸೂರಿನ ಮಹಾರಾಜರಾಗಿದ್ದರು. ಅವರನ್ನು ಜನಪ್ರಿಯವಾಗಿ ರಾಜರ್ಷಿ ಎಂದು ಕರೆಯಲಾಗುತ್ತದೆ, ಇದನ್ನು ಮಹಾತ್ಮರು ನೀಡಿದರು. ಗಾಂಧಿ, ಅವರ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾಧನೆಗಳಿಗಾಗಿ ಅವರ ಮರಣದ ಸಮಯದಲ್ಲಿ, ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು, 1 ರಲ್ಲಿ ವೈಯಕ್ತಿಕ ಸಂಪತ್ತು US$1940 ಮಿಲಿಯನ್ ಎಂದು ಅಂದಾಜಿಸಲಾಗಿದೆ, ಇದು 400 ರ ಬೆಲೆಯಲ್ಲಿ $7 ಶತಕೋಟಿಗೆ ಸಮನಾಗಿದೆ. ಹೈದರಾಬಾದ್ನ ನಿಜಾಮ್ ಮೀರ್ ಒಸ್ಮಾನ್ ಅಲಿ ಖಾನ್ ನಂತರ ಅವರು ಎರಡನೇ ಶ್ರೀಮಂತ ಭಾರತೀಯರಾಗಿದ್ದರು.

ಡಾ. ಶಲ್ವ ಪಿಳ್ಳೆ ಅಯ್ಯಂಗಾರ್
ಸಂಯೋಜಕರು
ಚಟುವಟಿಕೆಗಳು
• ೦೪/೦೭/೨೦೧೪ ರಂದು ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಗಳ ಬಗ್ಗೆ ಒಂದು ದಿನದ ಅಂತಾರಾಷ್ಟ್ರೀಯ ವಿಚಾರಸಂಕೀರ್ಣ
04/07/2014 ರಂದು ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಗಳ ಬಗ್ಗೆ ಒಂದು ದಿನದ ಅಂತಾರಾಷ್ಟ್ರೀಯ ವಿಚಾರಸಂಕೀರ್ಣವನ್ನು ನಡೆಸಲಾಯಿತು
• ದಿನಾಂಕ 11 ಮತ್ತು 12 2018 ರಂದು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಉಪನ್ಯಾಸ
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠದಿಂದ ದಿನಾಂಕ ೧೧ ಮತ್ತು ೧೨ ೨೦೧೮ ರಂದು ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಈ ವಿಚಾರ ಸಂಕೀರ್ಣದಲ್ಲಿ ಜರ್ಮನ್ ಮತ್ತು ಭಾರತ ದೇಶಗಳ ಐತಿಹಾಸಿಕ ಪ್ರಶಸ್ತಿಗಳ ಬಗ್ಗೆ ಹಾಗೂ ಭಾರತದ ಕಲೆ ಮತ್ತು ವಸ್ತು ಶಿಲ್ಪಗಳ ಬಗ್ಗೆ ಜರ್ಮನ್ ದೇಶದ ಮಾರ್ಕಶುಕ್ ರವರು ವಿಶೇಷ ಉಪಾನ್ಯಾಸ ನೀಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಅಧ್ಯಾಪಕರು ಗಣ್ಯರು ಸಂಶೋಧಕರು ಹಾಗೂ ವಿವಿಧ ಕ್ಷೇತ್ರಗಳ ಪರಿಣತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
• ದಿನಾಂಕ 20/08/2019 ಮತ್ತು 21/08/2019 ರಂದು ಎರಡು ದಿನದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ ಹಾಗೂ ದಿ ಮಿಥಿಕ್ ಸೊಸೈಟಿ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಜಯಚಾಮರಾಜ ಒಡೆಯರ್ ರವರ ಜೀವನ ಸಾಧನೆಗಳು ಎಂಬ ವಿಚಾರದ ಬಗ್ಗೆ ದಿನಾಂಕ ೨೦/೦೮/೨೦೧೯ ಮತ್ತು ೨೧/೦೮/೨೦೧೯ ರಂದು ಎರಡು ದಿನದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಪ್ರೊ.ಕೃ.ನರಹರಿ, ಶ್ರೀ.ವಿ.ನಾಗರಾಜ್ ಅಧ್ಯಕ್ಷತೆಯನ್ನು ಡಾ. ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಬೋಧಕ ಮತ್ತು ಭೋಧಕೇತರ ಮುಂತಾದವರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಘಟನೆಗಳು / ಸುತ್ತೋಲೆಗಳು
ವರದಿಗಳು
ಯಾವುದೇ ಡೇಟಾ ಲಭ್ಯವಿಲ್ಲ

